ನಮಸ್ಕಾರ ಸ್ನೇಹಿತರೇ, ವಿದ್ಯಾಸಿರಿ ವಿದ್ಯಾರ್ಥಿವೇತನ 2024-25 ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಸಹಾಯವಾಗಲು ಈ ವಿದ್ಯಾರ್ಥಿವೇತನವನ್ನ ನೀಡಲಾಗುತ್ತಿದೆ. ಮೆಟ್ರಿಕ್ ನಂತರದ ಕೋರ್ಸ್ ಗಳನ್ನ ಅಧ್ಯಯನ ಮಾಡುವಾಗ ಯಾವುದೇ ಇಲಾಖೆ ಹಾಗೂ ಸರ್ಕಾರದ ಅನುದಾನಿತ ವಿದ್ಯಾರ್ಥಿ ಹಾಸ್ಟೆಲ್ ಗಳಲ್ಲಿ ಪ್ರವೇಶ ಪಡೆಯದ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನವನ್ನ ನೀಡಲಾಗುತ್ತಿದೆ. ಇಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 15,000 ನೀಡಲಾಗುತ್ತದೆ.
Vidyasiri Scholarship Application 2024, 15000 Scholarship for Student, Karnataka Government Scholarship, Scholarship Update Kannada, Scholarship for Karnataka Students
ಇನ್ನು ಈ ವಿದ್ಯಾರ್ಥಿವೇತನವನ್ನ ಪಡೆಯಲು ಕೆಲ ಅರ್ಹ ಮಾನದಂಡಗಳು, ಅಗತ್ಯ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ವಿದ್ಯಾಸಿರಿ ವಿದ್ಯಾರ್ಥಿವೇತನ Vidyasiri Scholarship 2024-25
ವಿದ್ಯಾರ್ಥಿವೇತನದ ಹೆಸರು – ವಿದ್ಯಾಸಿರಿ ವಿದ್ಯಾರ್ಥಿವೇತನ.
ಇಲಾಖೆ – ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಸರ್ಕಾರ.
ಫಲಾನುಭವಿಗಳು- OBC ವಿದ್ಯಾರ್ಥಿಗಳಿಗೆ.
ಶೈಕ್ಷಣಿಕ ವರ್ಷ- 2024-25.
ವಿಧ್ಯಾರ್ಥಿವೇತನದ ಮೊತ್ತ – 15,000ರೂ. (ವಾರ್ಷಿಕ)
ಅಪ್ಲಿಕೇಶನ್ ಕೊನೆಯ ದಿನಾಂಕ – 31/10/2024
Vidyasiri Scholarship ವಿದ್ಯಾಸಿರಿ ವಿದ್ಯಾರ್ಥಿವೇತನ 2024-25 ಅರ್ಹತಾ ಮಾನದಂಡಗಳು:
ಅರ್ಜಿ ಸಲ್ಲಿಸುವ ವಿಧ್ಯಾರ್ಥಿಯು ಭಾರತದ ಪ್ರಜೆಯಾಗಿರಬೇಕು. ಕರ್ನಾಟಕ ಖಾಯಂ ನಿವಾಸಿಯಾಗಿರಬೇಕು.
ಮೆಟ್ರಿಕ್ ನಂತರದ ಕೋರ್ಸ್ ಗಳನ್ನ ಅಧ್ಯಯನ ಮಾಡುವಾಗ ಯಾವುದೇ ಇಲಾಖೆ ಹಾಗೂ ಸರ್ಕಾರದ ಅನುದಾನಿತ ವಿದ್ಯಾರ್ಥಿ ಹಾಸ್ಟೆಲ್ ಗಳಲ್ಲಿ ಪ್ರವೇಶ ಪಡೆಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಒಂದೇ ಕುಟುಂಬದ ಇಬ್ಬರು ವಿದ್ಯಾರ್ಥಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
ಶೈಕ್ಷಣಿಕ ವಿದ್ಯಾ ಅರ್ಹತೆಗಳು Educational Qualification:
BA, B.com, BBA, BCA, BSC, ITI, ಡಿಪ್ಲೊಮಾ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ವಿಧ್ಯಾರ್ಥಿಯ ತರಗತಿ ಹಾಜರಾತಿ 75% ಗಿಂತ ಹೆಚ್ಚಿರಬೇಕು.
ಹೊಸದಾಗಿ ಅರ್ಜಿ ಸಲ್ಲಿಸುವ ವಿಧ್ಯಾರ್ಥಿ ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ ನೀಡಬೇಕು.
ಜಾತಿ ಪ್ರಮಾಣ ಪತ್ರದ ಆದಾರದ ಮೇಲೆ:
ಪ್ರ.ವರ್ಗ 1 ವಿದ್ಯಾರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸುತ್ತಿದ್ದರೆ, 40% ಅಂಕಗಳ ಆಧಾರದ ಮೇಲೆ ಹಾಗೂ ಈ ಹಿಂದೆ ಅರ್ಜಿ ಸಲ್ಲಿಸಿ ಲಾಭಾವನ್ನ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ 50% ಅಂಕಗಳೊಂದಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
2A,3A ಹಾಗು 3B ವಿದ್ಯಾರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸುತ್ತಿದ್ದರೆ, 50% ಅಂಕಗಳ ಆಧಾರದ ಮೇಲೆ ಹಾಗೂ ಈ ಹಿಂದೆ ಅರ್ಜಿ ಸಲ್ಲಿಸಿ ಲಾಭಾವನ್ನ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ 60% ಅಂಕಗಳೊಂದಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಆದಾಯದ ಅಗತ್ಯತೆಗಳು:
ಪ್ರವರ್ಗ 1 ವಿದ್ಯಾರ್ಥಿಗಳ ಆದಾಯ 2.5 ಲಕ್ಷ ಮೀರಿರಬಾರದು.
2A,3A ಹಾಗು 3B ವಿದ್ಯಾರ್ಥಿಗಳ ಆದಾಯ 1 ಲಕ್ಷ ಮೀರಿರಬಾರದು.
ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು Vidyasiri Scholarship Documentation for applying:
- ವಿದ್ಯಾರ್ಥಿಯ ಹಿಂದಿನ ವರ್ಷದ ಅಂಕಪಟ್ಟಿ.
- ವಿದ್ಯಾರ್ಥಿಯ ಆಧಾರ ಕಾರ್ಡ್.
- ಪೋಷಕರ ಆಧಾರ್ ಕಾರ್ಡ್.
- ವಿದ್ಯಾರ್ಥಿಯ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ.
- ಬ್ಯಾಂಕ್ ಪಾಸ್ ಬುಕ್.
- ವಿದ್ಯಾರ್ಥಿಯ ಮೊಬೈಲ್ ನಂಬರ್ ಹಾಗು ಮೇಲ್ ಐಡಿ.
- ವಿದ್ಯಾರ್ಥಿಯ ಪಾಸ್ ಪೋರ್ಟ್ ಅಳತೆಯ ಫೋಟೋ.
- ಪ್ರಸ್ತುತ ಕಾಲೇಜ್ ನ ಸ್ಟಡಿ ಸರ್ಟಿಫಿಕೇಟ್ ಅಥವಾ ಕಾಲೇಜ್ ID ಕಾರ್ಡ್.
Recent Post:
ಬಿಗ್ ಬಾಸ್ 12ರ ಸ್ಪರ್ಧಿಗಳ ವಯಸ್ಸು ಹಾಗೂ ಹುಟ್ಟೂರು, ಬಿಗ್ ಬಾಸ್ 12 ಸ್ಪರ್ಧಿಗಳ ಬಗ್ಗೆ ಸಂಪೂರ್ಣ ಮಾಹಿತಿ, BBK12
ಕಾರು ಟ್ಯಾಕ್ಸಿ ಖರೀದಿಗೆ 4ಲಕ್ಷ ಸಹಾಯಧನ, 4 lakh subsidy for purchase of car taxi, ಸ್ವಾವಲಂಬಿ ಸಾರಥಿ ಯೋಜನೆ 2025
Vidyasiri Scholarship ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇನ್ನು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/102024. ಇನ್ನು ಇದು ಕೆಲ ದಿನಗಳವರೆಗೆ ಕಾಲಾವಕಾಶ ನೀಡಬಹುದು ಹಾಗೂ ನೀಡದೆ ಇರಬಹುದು.
Vidyasiri Scholarship ವಿದ್ಯಾಸಿರಿ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಸುವ ಲಿಂಕ್: Apply Now
Vidyasiri Scholarship ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಸ್ನೇಹಿತರೇ, ಮೊದಲು ನಿಮಗೆ ವಿದ್ಯಾಸಿರಿ ಸ್ಕಾಲರ್ಷಿಪ್ ಗೆ ಅರ್ಜಿ ಸಲ್ಲಿಸಲು ಪ್ರತ್ಯೇಕವಾಗಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ನೀವು SSP ಸ್ಕಾಲರ್ಷಿಪ್ ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಇದೀಗ ಅರ್ಜಿ ಸಲ್ಲಿಸುವುದರ ಸಂಪೂರ್ಣ ಮಾಹಿತಿ ತಿಳಿಯೋಣ.
- ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ website ಪೋರ್ಟಲ್ ಓಪನ್ ಆಗುತ್ತೆ.
- ಅದು ನಿಮಗೆ SSP ಪೋರ್ಟಲ್ ಗೆ ನಿಮ್ಮನ್ನ ಕರೆದೊಯ್ಯುತ್ತೆ. ನೀವು ಮೊದಲ ಬಾರಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ ಮೊದಲು ನೀವು Website ನಲ್ಲಿ Sign In ಆಗಿ.
- sign in ಆಗುವಾಗ ನಿಮ್ಮ ಕೆಲ ದಾಖಲೆಗಳು ಕೇಳುತ್ತೆ ನಿಮ್ಮ ಎಲ್ಲಾ ದಾಖಲೆಗಳನ್ನ ಸರಿಯಾಗಿ ನೀಡಿ register ಆಗಬೇಕಾಗುತ್ತೆ.
- ನಂತರ ನಿಮ್ಮ user ID ಹಾಗೂ set ಮಾಡಿರುವ Password ಕೇಳುತ್ತೆ. ಎಲ್ಲವನ್ನೂ ಸರಿಯಾಗಿ ನೀಡಿ, login ಆಗಬೇಕು.
- ನಂತರ ಅಲ್ಲಿ ನಿಮಗೆ Vidyasiri Scholarship ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು Apply Now ಎನ್ನುವ Option ಇರುತ್ತೆ.
- ಅದರ ಮೇಲೆ ಕ್ಲಿಕ್ ಮಾಡಿದ್ರೆ ಅಪ್ಲಿಕೇಶನ್ ಓಪನ್ ಆಗುತ್ತೆ. ನಂತರ ಅಪ್ಲಿಕೇಶನ್ ನಲ್ಲಿ ನಿಮ್ಮ ಮಾಹಿತಿಯನ್ನ ನಿಡಿ ಈ ಸ್ಕಾಲರ್ಷಿಪ್ ಗೆ ಅರ್ಜಿ ಸಲ್ಲಿಸಬಹುದು.
Vidyasiri Scholarship ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ನಂತರ ಆಗುವ ಪ್ರಕ್ರಿಯೆ:
- ಮೊದಲು ವಿದ್ಯಾರ್ಥಿಯ ಅಪ್ಲಿಕೇಶನ್ ಅನ್ನು SSP ಪೋರ್ಟಲ್ ನ ಮೂಲಕ ಅರ್ಜಿ ಸ್ವೀಕರಿಸಲಾಗುತ್ತದೆ.
- ವಿದ್ಯಾರ್ಥಿ ಸಲ್ಲಿಸಿದ ಅರ್ಜಿಗಳು ಹಾಗೂ ದಾಖಲೆಗಳು ಕಾಲೇಜ್ ಪ್ರಾಂಶುಪಾಲರು ಮತ್ತು B.C.W.D ಅಧಿಕಾರಿಗಳು ಪರಿಶೀಲಿಸುತ್ತಾರೆ.
- ತಾಲೂಕಿನಲ್ಲಿ ಹಿಂದುಳಿದ ವರ್ಗದ ಕಲ್ಯಾಣ ಅಧಿಕಾರಿಗಳು ಅರ್ಜಿಯನ್ನ ಪರಿಶೀಲಿಸುತ್ತಾರೆ. ನಂತರ ಅವುಗಳನ್ನು ಜಿಲ್ಲಾ B.C.W.D ಅಧಿಕಾರಿಗಳಿಗೆ ರವಾನಿಸುತ್ತಾರೆ.
- ಜಿಲ್ಲಾ ಹಿಂದುಳಿದ ವರ್ಗದ ಕಲ್ಯಾಣಾದಿಕಾರಿಗಳು ಅರ್ಜಿಯನ್ನು ಪರಿಶೀಲಿಸುತ್ತಾರೆ.
- ಅಲ್ಲಾ ಹಂತಗಳಲ್ಲಿ ಚೆಕ್ ಮಾಡಿ, ವಿದ್ಯಾಸಿರಿ ಸ್ಕಾಲರ್ಶಿಪ್ ಮೊತ್ತವನ್ನು ಡಿ.ಬಿ.ಟಿ. ಮೂಲಕ ವಿದ್ಯಾರ್ಥಿಗಳ ಆಧಾರ್ ನಂಬರ್ ನೋಂದಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.
So ಈ ರೀತಿಯಲ್ಲಿ ವಿದ್ಯಾಸಿರಿ ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ಸಿಗಲಿದೆ. ಆದ್ದರಿಂದ ನಿಮಗೆ ಈ ಸ್ಕಾಲರ್ಶಿಪ್ ಪಡೆದುಕೊಳ್ಳಲು ಈ ಮೇಲೆ ಎಲ್ಲಾ ಮಹಿತಿ ನೀಡಿದ್ದೇನೆ. ಎಲ್ಲವನ್ನ ಸೂಕ್ಷ್ಮವಾಗಿ ಗಮನಿಸಿ, ನೀವು ಕೂಡ ಯೋಜನೆಯ ಲಾಭವನ್ನ ಪಡೆಯಬಹುದು. ಇನ್ನು ಇದರ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾದಲ್ಲಿ ಹಾಗೂ ಇನ್ನು ಆನೇಕ ಸ್ಕಾಲರ್ಶಿಪ್ ಬಗ್ಗೆ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಇನ್ನಷ್ಟು ಮಾಹಿತಿ ಪಡೆಯಬಹುದು.
https://myeduupdatekannada.com/
Vidyasiri Scholarship Application 2024, 15000 Scholarship for Student, Karnataka Government Scholarship, Scholarship Update Kannada, Scholarship for Karnataka Students

