ನಮಸ್ಕಾರ ಸ್ನೇಹಿತರೇ, ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಒಂದು ಮುಖ್ಯವಾದ ಅಪ್ಡೇಟ್ ಒಂದು ಬಂದಿದೆ. ಹೌದು, ಇನ್ಮುಂದೆ ನಿಮಗೆ ಗೃಹಲಕ್ಷ್ಮೀ ಯೋಜನೆ ಹಣ ಬರಬೇಕು ಅಂದ್ರೆ ಈ ಕಾರ್ಡ್ ನೀವು ಮಾಡಿಸಬೇಕು. ಹೌದು ನಿಮ್ಮ ಬಳಿ ಈ ಒಂದು ಸರ್ಟಿಫಿಕೇಟ್ ಕಡ್ಡಾಯ. ಇದು ನಿಮ್ಮ ಬಳಿ ಇಲ್ಲ ಅಂದ್ರೆ ಇನ್ಮುಂದೆ ನಿನಗೆ ಗೃಹಲಕ್ಷ್ಮೀ ಯೋಜನೆ ಹಣ ಬರೋದಿಲ್ಲ. ಇನ್ನು ಇದರ ಜೊತೆಗೆ ಯಾರಿಗೆಲ್ಲ ಕೆಲ ತಿಂಗಳುಗಳ ಕಂತು ಬಂದಿಲ್ವೋ, ಅವರು ಗಳು ಈ ಕಾರ್ಡ್ ಮಾಡಿಸಿದ ನಂತರ ನಿಮಗೆ ಬರಬೇಕಿರುವ ಎಲ್ಲಾ ಕಂತುಗಳು ಸಹ ಬರುತ್ತೆ. ಇನ್ನು ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ತಿಳಿಯೋಣ.
ಇನ್ಮುಂದೆ ಗೃಹಲಕ್ಷ್ಮೀ ಹಣ ಪಡೆಯಲು ಜೀವಿತ ಪ್ರಮಾಣ ಪತ್ರ ಕಡ್ಡಾಯ, Life Certificate For Gruhalakshmi Scheme, ಜೀವಿತ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸೋದು ಹೇಗೆ, Gruhalakshmi Scheme Update, Congress
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು 5 ಗ್ಯಾರಂಟಿ ಯೋಜನೆಗಳನ್ನು ತರುತ್ತೇವೆ ಅಂತಾ ಹೇಳಿದ್ರು. ಅದೇ ರೀತಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಇನ್ನು ಅಧಿಕಾರಕ್ಕೆ ಬಂದ ನಂತರ 5 ಗ್ಯಾರಂಟಿ ಯೋಜನೆಗಳು ಜಾರಿಗೆ ತರುತ್ತಾರೆ. ಇನ್ನು ಈ ಗ್ಯಾರಂಟಿ ಯೋಜನೆಗಳು ಯಾವುದು ಅಂದರೆ ಅನ್ನಭಾಗ್ಯ ಯೋಜನೆ, ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆ, ಗೃಹಜ್ಯೋತಿ ಯೋಜನೆ ಮತ್ತು ಯುವನಿಧಿ ಯೋಜನೆ. ಕಾಂಗ್ರೆಸ್ ನ 5 ಗ್ಯಾರಂಟೀ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದು. ಈ ಯೋಜನೆಯ ಮೂಲಕ ಮನೆಯ ಯಜಮಾನಿಗೆ ಪ್ರತಿ ತಿಂಗಳು ಅವರವರ ಖಾತೆಗೆ 2000 ಹಣ ಜಮಾ ಆಗಲಿದೆ. ಈ ಯೋಜನೆಯ ಮೂಲಕ ಮನೆ ನಡೆಸಿಕೊಂಡು ಹೋಗುತ್ತಿರುವ ಯಜಮಾನಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ₹2000ರೂ ಡಿಬಿಟಿ ಮೂಲಕ ವರ್ಗಾವಣೆಯಾಗುತ್ತಿತ್ತು.

ಗೃಹಲಕ್ಷ್ಮೀ ಯೋಜನೆಯ ಹಣ ಇಲ್ಲಿಯವರೆಗೆ 24ನೇ ಕಂತಿನವರೆಗೆ ಜಮಾ ಆಗಿದೆ. ಅಂದರೆ ಇಲ್ಲಿಯವರೆಗೆ 48,000 ರೂ. ಜಮಾ ಮಾಡಲಾಗಿದೆ. ಇದೀಗ ಜಮಾ ಆಗಬೇಕಿರುವುದು 25 ಮತ್ತು 26ನೇ ಕಂತಿನ ಹಣ. ಇದು ಫೆಬ್ರವರಿ ತಿಂಗಳಲ್ಲಿ ಜಮಾ ಆಗಲಿದೆ.
ಇದೀಗ ಸರ್ಕಾರ ಗೃಹಲಕ್ಷ್ಮೀ ಯೋಜನೆಯಲ್ಲಿ ಹೊಸ ನಿಯಮವನ್ನು ಹೊರಡಿಸಿದೆ. ಹೌದು ಇನ್ಮುಂದೆ ನಿಮಗೆ ಗೃಹಲಕ್ಷ್ಮೀ ಯೋಜನೆಯ ಹಣ ಬರಬೇಕು ಅಂದ್ರೆ ಈ ಸರ್ಟಿಫಿಕೇಟ್ ಕಡ್ಡಾಯ ಆಗಿರುತ್ತದೆ. ಇದು ನಿಮ್ಮ ಬಳಿ ಇದ್ರೆ ಇನ್ಮುಂದೆ ನಿಮಗೆ ಪ್ರತಿ ತಿಂಗಳು ಗೃಹಲಕ್ಷ್ಮೀ ಹಣ ಸಿಗುತ್ತೆ. ಆ ಸರ್ಟಿಫಿಕೇಟ್ ಯಾವುದೆಂದರೆ ಜೀವಿತ ಪ್ರಮಾಣ ಪತ್ರ. ಹೌದು ಇದು ಇನ್ಮುಂದೆ ಕಡ್ಡಾಯ. ಇನ್ನು ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ಜೀವಿತ ಪ್ರಮಾಣ ಪತ್ರ:
ಜೀವಿತ ಪ್ರಮಾಣ ಪತ್ರ ಅಂದರೆ ನಾನು ಇನ್ನು ಕೂಡ ಬದುಕಿದ್ದೇನೆ ಎಂದು ಸರ್ಕಾರಕ್ಕೆ ಪ್ರಮಾಣೀಕರಿಸಲು ನೀಡುವ ಒಂದು ಸರ್ಟಿಫಿಕೇಟ್. ಇದನ್ನ ಅತಿ ಹೆಚ್ಚಾಗಿ ಉದ್ಯೋಗದಲ್ಲಿ ರಿಟೈರ್ಡ್ ಆದ ಬಳಿಕ ಪೆನ್ಶನ್ ಸೌಲಭ್ಯ ಪಡೆದುಕೊಳ್ಳಲು ಇದನ್ನ ಬಳಸಲಾಗುತ್ತದೆ. ಇದನ್ನ ಪ್ರತಿ ವರ್ಷ ರಿನಿವಲ್ ಮಾಡಿಸಬೇಕು. ಒಬ್ಬ ವ್ಯಕ್ತಿಯ ಹೆಸರಲ್ಲಿ ಇದನ್ನ ಮಾಡಿ ಸರ್ಕಾರದಿಂದ ಪ್ರತಿ ತಿಂಗಳು ಪೆನ್ಶನ್ ಹಣ ತೆಗೆದುಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಪೆನ್ಶನ್ ಪಡೆಯುತ್ತಿದ್ದ ವ್ಯಕ್ತಿ ಸತ್ತ ನಂತರ ಆತನಿಗೆ ನೀಡುತ್ತಿದ್ದ ಹಣ ಅಥವಾ ಆತನಿಗೆ ನೀಡುತ್ತಿದ್ದ ಪೆನ್ಶನ್ ಹಣ ತಿಳಿಸಲಾಗುತ್ತದೆ. ಆದರೆ ಪ್ರತಿ ತಿಂಗಳು ಎನು ಪೆನ್ಶನ್ ಹಣ ನೀಡಲಾಗುತ್ತಿತ್ತೋ ಅದನ್ನ ನಿಲ್ಲಿಸುತ್ತದೆ. ಅದೇ ರೀತಿ ಈಗ ಗೃಹಲಕ್ಷ್ಮೀ ಯೋಜನೆ ಗು ಸಹ ತರಲಾಗುತ್ತದೆ.
ಇನ್ಮುಂದೆ ನೀವು ಗೃಹಲಕ್ಷ್ಮೀ ಯೋಜನೆಯ ಹಣ ಪಡೆಯಬೇಕು ಎಂದರೆ ಇದು ಕಡ್ಡಾಯ. ಇದೀಗ ರಾಜ್ಯದಲ್ಲಿ ತುಂಬಾ ಜನ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಈ ಹಿಂದೆ ಅರ್ಜಿ ಸಲ್ಲಿಸಿದ ತುಂಬಾ ಜನ ಫಲಾನುಭವಿಗಳು ಮರಣ ಹೊಂದಿದ್ದಾರೆ. ಆದರು ಸಹ ಅವರ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮಾ ಆಗುತ್ತಿದೆ. ಇದನ್ನ ತಪ್ಪಿಸುವ ಸಲುವಾಗಿ ಈ ಕಾರ್ಡ್ ಅನ್ನು ತರುತ್ತಿದ್ದಾರೆ.
ಇದನ್ನ ಓದಿ: Union Bank Bank Personal loan 2026: 50000 ದಿಂದ 15 ಲಕ್ಷದವರೆಗೆ ಕಡಿಮೆ ಬಡ್ಡಿಯಲ್ಲಿ ಲೋನ್ ಪಡೆಯಿರಿ, Personal Loan
ಬಾಕಿ ಉಳಿದಿರುವ ಕಂತುಗಳು ಜಮಾ ಆಗುತ್ತೆ?
ಗೃಹಲಕ್ಷ್ಮೀ ಯೋಜನೆಯ ಮೂಲಕ ಪ್ರತಿ ತಿಂಗಳು ಗೃಹಲಕ್ಷ್ಮೀ ಫಲಾನುಭವಿಗಳು 2000 ಹಣ ಅವರ ಖಾತೆಗೆ ಜಮಾ ಆಗುತ್ತಿದೆ. ಆದರೆ ತುಂಬಾ ಜನ ಫಲಾನುಭವಿಗಳು ಖಾತೆಗೆ ಹಣ ಜಮಾ ಆಗಿಲ್ಲ. ಕೆಲವು ತಿಂಗಳುಗಳ ಹಣ ಜಮಾ ಆಗದೆ ಹಾಗೆ ಉಳಿದಿದೆ. ಇನ್ಮುಂದೆ ನಿಮ್ಮ ಬಾಕಿ ಉಳಿದಿರುವ ಹಣ ಕೂಡ ಜಮಾ ಆಗುತ್ತೆ. ನೀವು ಇಲ್ಲಿ ಜೀವಿತ ಪ್ರಮಾಣ ಪತ್ರ ಮಾಡಿಸಿದ ನಂತರ, ನಿಮ್ಮ ಗೃಹಲಕ್ಷ್ಮೀ ಖಾತೆಗೆ ಅಪ್ಡೇಟ್ ಮಾಡಿದ ನಂತರ ನಿಮ್ಮ ಪೆಂಡಿಂಗ್ ನಲ್ಲಿ ಇರುವ ಹಣ ಅಲ್ಲಿ ತೋರುತ್ತದೆ. ನಂತರ ಸರ್ಕಾರ ನಿಮಗೆ ಬರಬೇಕಿರುವ ಹಣ ಸಹ ಬಿಡುಗಡೆ ಮಾಡುತ್ತಾರೆ.
ಜೀವಿತ ಪ್ರಮಾಣ ಪತ್ರ ಪಡೆಯೋದು ಹೇಗೆ?
ನಿಮ್ಮ ಜೀವಿತ ಪ್ರಮಾಣ ಪತ್ರ ಪಡೆಯಬೇಕೆಂದರೆ ನಿಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮ್ ಒನ್, ಬೆಂಗಳೂರು ಒನ್, ಸೇವಾಸಿಂಧು ಪೋರ್ಟಲ್ ಗಳಲ್ಲಿ ಅಥವಾ ನಿಮ್ಮ ಹತ್ತಿರದ Cyber ಸೆಂಟರ್ ಗಳಲ್ಲಿ ಸಹ ಅರ್ಜಿ ಸಲ್ಲಿಸಬಹುದು. ಹಾಗೂ ಆನ್ಲೈನ್ ನಲ್ಲಿ ನೀವು ಸಹ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಇನ್ನು ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಎನೇನು ಎಂದರೆ ನಿಮ್ಮ ಆಧಾರ್ ಕಾರ್ಡ್, ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ ಹಾಗೂ ನಿಮ್ಮ ಬ್ಯಾಂಕ್ ಪಾಸ್ ಬುಕ್ ನೀಡಬೇಕು. ಹಾಗೂ ನಿಮ್ಮ ಬಯೋಮೆಟ್ರಿಕ್ ಹಾಗೂ ಓಟಿಪಿ ವೆರಿಫಿಕೇಶನ್ ಸಹ ಇರುತ್ತದೆ.
ಇದನ್ನ ಓದಿ: ಅನ್ನಭಾಗ್ಯ ಯೋಜನೆ ಜೊತೆಗೆ ಇಂದಿರಾ ಕಿಟ್, Government New Scheme, Indira Kit For Free, Annabagya Scheme Update
ಇಲ್ಲಿ ನೀವು ಪ್ರತಿ ತಿಂಗಳು ಅಪ್ಡೇಟ್ ಮಾಡುವ ಅವಶ್ಯತೆ ಇರುವುದಿಲ್ಲ. ವರ್ಷಕ್ಕೆ ಒಮ್ಮೆ ಬಾರಿ ಮಾತ್ರ ಅಪ್ಡೇಟ್ ಮಾಡುವುದಿರುತ್ತದೆ. ಇನ್ನು ಇದನ್ನ ನೀವು ಕರ್ನಾಟಕ ಒನ್, ಗ್ರಾಮ್ ಒನ್, ಬೆಂಗಳೂರು ಒನ್ ಅಥವಾ ಸೇವಾಸಿಂಧು ಪೋರ್ಟಲ್ ನಲ್ಲಿ ಮಾಡಿಸಿದರೆ ಒಳ್ಳೆಯದು. ಯಾಕೆಂದರೆ ಆನ್ಲೈನ್ ನಲ್ಲಿ ನಡೆಯುವ ಕೆಲ ಸ್ಕ್ಯಾಮ್ ಗಳನ್ನ ನೀವು ತಪ್ಪಿಸಬಹುದು.
ಇನ್ನು ಗೃಹಲಕ್ಷ್ಮೀ ಯೋಜನೆಗೆ ಇದು ಕಡ್ಡಾಯ ವಾಗಿರುವ ಕಾರಣ ನೀವು ಇದನ್ನ ಆದಷ್ಟು ಎಲ್ಲಾ ಕಡೆ ಶೇರ್ ಮಾಡಿ. ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ₹2,000 ಪಡೆಯುತ್ತಿರುವ ಮಹಿಳೆಯರು ಇನ್ಮುಂದೆ ವರ್ಷಕ್ಕೊಮ್ಮೆ ಕಡ್ಡಾಯವಾಗಿ ಜೀವಿತ ಪ್ರಮಾಣ ಪತ್ರ ಸಲ್ಲಿಸಬೇಕು. ಮೃತಪಟ್ಟವರ ಹೆಸರಿನಲ್ಲಿ ಹಣ ಪೋಲಾಗುವುದನ್ನು ತಡೆಯಲು ಮತ್ತು ಕೇವಲ ಅರ್ಹ ಫಲಾನುಭವಿಗಳಿಗೆ ಮಾತ್ರ ಹಣ ತಲುಪುವಂತೆ ಮಾಡಲು ಸರ್ಕಾರ ಈ ಕ್ರಮ ಕೈಗೊಂಡಿದೆ.
ಇನ್ಮುಂದೆ ಗೃಹಲಕ್ಷ್ಮೀ ಹಣ ಪಡೆಯಲು ಜೀವಿತ ಪ್ರಮಾಣ ಪತ್ರ ಕಡ್ಡಾಯ, Life Certificate For Gruhalakshmi Scheme, ಜೀವಿತ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸೋದು ಹೇಗೆ, Gruhalakshmi Scheme Update, Congress
