ನಮಸ್ಕಾರ ಸ್ನೇಹಿತರೇ, ಇದೀಗ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮವು (Karnataka State Safai Karmachari Development Corporation) ರಾಜ್ಯದ ಪರಿಶಿಷ್ಟ ಜಾತಿ, ಪೌರ ಕಾರ್ಮಿಕ ಹಾಗೂ ಮ್ಯಾನ್ಯುಯಲ್ ಸ್ಕ್ಯಾವೆಂಜರ್ (Manual Scavenger) ಕುಟುಂಬಗಳ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗಲು ಒಂದು ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲಿ, ಅರ್ಹ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ಗಳನ್ನು ವಿತರಿಸಲಾಗುತ್ತಿದೆ. ಆಸಕ್ತರು ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ಮೂಲಕ ಅರ್ಜಿ ಸಲ್ಲಿಸಬಹುದು. ಇನ್ನು ಈ ಕೆಳಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
Free Laptop Scheme Apply Now, ಉಚಿತ ಲ್ಯಾಪ್ಟಾಪ್ ವಿತರಣಾ ಯೋಜನೆ, How to Apply New Laptop in Online, Government Free Laptop Scheme, Free Laptop for Karnataka Students
ಈ ಯೋಜನೆಯು ಹಿಂದುಳಿದ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ಮಕ್ಕಳಿಗೆ ಡಿಜಿಟಲ್ ಶಿಕ್ಷಣವನ್ನು ತಲುಪಿಸುವ ಸಲುವಾಗಿ ಈ ಯೋಜನೆ ತರಲಾಗಿದೆ. ಇನ್ನು ಈ ಮೂಲಕ ಸಮಾಜದಲ್ಲಿ ಸಮಾನ ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.
ಈ ಯೋಜನೆಯ ಪ್ರಮುಖ ಉದ್ದೇಶಗಳು:
ಉಚಿತ ಲ್ಯಾಪ್ಟಾಪ್ ವಿತರಣಾ ಯೋಜನೆಯ ಪ್ರಮುಖ ಉದ್ದೇಶಗಳನ್ನು ಇದೀಗ ನೋಡೋಣ.
- ಡಿಜಿಟಲ್ ಶಿಕ್ಷಣ: ಸಫಾಯಿ ಕರ್ಮಚಾರಿಗಳ ಮಕ್ಕಳು ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ಸುಲಭವಾಗಿ ಪಡೆವುದು ಈ ಯೋಜನೆಯ ಪ್ರಮುಖ ಉದ್ದೇಶ.
- ಆತ್ಮವಿಶ್ವಾಸ ಹೆಚ್ಚಳ: ಬಡ ವರ್ಗದ ಮಕ್ಕಳಲ್ಲಿ ಶೈಕ್ಷಣಿಕ ಪ್ರಗತಿ ಮತ್ತು ತಂತ್ರಜ್ಞಾನ ಬಳಕೆಯ ಬಗ್ಗೆ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶ.
- ಆನ್ಲೈನ್ ಕಲಿಕೆ: ಆನ್ಲೈನ್ ತರಗತಿಗಳು, ಇ-ಪುಸ್ತಕಗಳು, ಸಂಶೋಧನಾ ವೇದಿಕೆಗಳು ಮತ್ತು ಡಿಜಿಟಲ್ ಪಠ್ಯ ವಸ್ತುಗಳಿಗೆ ಸುಲಭವಾಗಿ ಪ್ರವೇಶ ಕಲ್ಪಿಸುವುದು.
- ವಿದ್ಯಾಭ್ಯಾಸಕ್ಕೆ ಬೆಂಬಲ: ತಂತ್ರಜ್ಞಾನದ ನೆರವಿನಿಂದ ಪ್ರಾಜೆಕ್ಟ್ಗಳು, ಸಂಶೋಧನಾ ಕಾರ್ಯಗಳು ಮತ್ತು ಅಸೈನ್ಮೆಂಟ್ಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಪ್ರೋತ್ಸಾಹಿಸುವುದು.

ಅರ್ಹತಾ ಮಾನದಂಡಗಳು (Eligibility Criteria):
ಈ ಯೋಜನೆಯ ಪ್ರಯೋಜನ ಪಡೆಯಲು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಈ ಕೆಳಗಿನ ಪ್ರಮುಖ ಅರ್ಹತಾ ಮಾನದಂಡಗಳು ಇರುತ್ತದೆ. ಅವುಗಳು ಯಾವುದು ಎನ್ನುವುದನ್ನ ಇದೀಗ ನೋಡೋಣ.
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಭಾರತದ ಪ್ರಜೆಯಾಗಿರಬೇಕು.
- ವಿದ್ಯಾರ್ಥಿಯು ತನ್ನ ಮುಂದಿನ ಶಿಕ್ಷಣಕ್ಕೆ ಸೇರ್ಪಡೆಯಾಗಿರಬೇಕು.
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ತಂದೆ ಅಥವಾ ತಾಯಿ ಪರಿಶಿಷ್ಟ ಜಾತಿಗೆ ಸೇರಿದ ಸಫಾಯಿ ಕರ್ಮಚಾರಿ, ಪೌರ ಕಾರ್ಮಿಕ ಅಥವಾ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಆಗಿರಬೇಕು.
- ಹೊಸದಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ ನೀಡಬೇಕು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
ಅರ್ಜಿಯೊಂದಿಗೆ ಈ ಕೆಳಗಿನ ಎಲ್ಲಾ ದಾಖಲೆಗಳ ಸ್ವ-ದೃಢೀಕೃತ ಪ್ರತಿಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು.
- ವೈಯಕ್ತಿಕ ದಾಖಲೆಗಳು: ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಫೋಟೋಗಳು, ಮೊಬೈಲ್ ನಂಬರ್ ಮತ್ತು ಮೇಲ್ ಐಡಿ.
- ಸೇವಾ ಸಂಬಂಧಿ ದಾಖಲೆಗಳು: ತಂದೆ/ತಾಯಿಯ ಸಫಾಯಿ ಕರ್ಮಚಾರಿ ಗುರುತಿನ ಚೀಟಿ.
- ಆರ್ಥಿಕ/ಸಾಮಾಜಿಕ ದಾಖಲೆಗಳು: ಜಾತಿ ಪ್ರಮಾಣಪತ್ರ (Caste Certificate) ಮತ್ತು ವಿದ್ಯಾರ್ಥಿ ಮತ್ತು ಪೋಷಕರ ಆದಾಯ ಪ್ರಮಾಣಪತ್ರ. ರೇಷನ್ ಕಾರ್ಡ್ (Ration Card) ಮತ್ತು ಫೀಸ್ ರಸೀದಿ.
- ಶೈಕ್ಷಣಿಕ ದಾಖಲೆಗಳು: ಕಾಲೇಜು/ವಿಶ್ವವಿದ್ಯಾಲಯದಿಂದ ಪಡೆದ ವ್ಯಾಸಂಗ ಪ್ರಮಾಣಪತ್ರ (Bonafide Certificate).
- ವಿದ್ಯಾರ್ಥಿ ID ಕಾರ್ಡ್.
- ಹಿಂದಿನ ವರ್ಷ ಅಥವಾ ಸೆಮಿಸ್ಟರ್ನ ಅಂಕಪಟ್ಟಿ (Marks Card).
- ಕಾಲೇಜಿನಿಂದ ನೀಡಲಾದ ಫೀಸ್ ರಸೀದಿ (Fee Receipt).
- ಗುರುತು ಪುರಾವೆ: ವಿದ್ಯಾರ್ಥಿ ಮತ್ತು ಪೋಷಕರು ಆಧಾರ್ ಕಾರ್ಡ್.
ಇದನ್ನ ಓದಿ: ಉಚಿತ ಹೊಲಿಗೆ ಯಂತ್ರ ಯೋಜನೆ: ಮಹಿಳೆಯರಿಗೆ ಸ್ವಾವಲಂಬನೆಗೆ ಉಚಿತ ಹೊಲಿಗೆ ಯಂತ್ರ, ಯಾರಿಗೆಲ್ಲ ಉಚಿತ ಹೊಲಿಗೆ ಯಂತ್ರ ಸಿಗುತ್ತೆ, Free Sewing Machine Scheme Update
ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆ:
ವಿದ್ಯಾರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಕಾಲೇಜಿನಲ್ಲಿ ಈ ಕೆಳಗಿನ ಯಾವುದೇ ಸ್ನಾತಕ (Undergraduate) ಅಥವಾ ಸ್ನಾತಕೋತ್ತರ (Postgraduate) ಕೋರ್ಸ್ಗಳಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು (ವ್ಯಾಸಂಗ ಮಾಡುತ್ತಿರಬೇಕು):
- B.Com, B.Sc, BBM, BCA
- MBBS
- M.Com, MA, M.Sc, M.Tech, MBA
ಇದೇ ರೀತಿಯ ಯಾವುದೇ ಸಮಾನ ಪದವಿ/ಸ್ನಾತಕೋತ್ತರ ಕೋರ್ಸ್ಗಳು.
ಅರ್ಜಿ ಸಲ್ಲಿಸುವ ವಿಧಾನ ಮತ್ತು ವಿಳಾಸ (Offline Application):
ಈ ಯೋಜನೆಯು ಸದ್ಯಕ್ಕೆ ಆನ್ಲೈನ್ ಅರ್ಜಿ ವ್ಯವಸ್ಥೆಯನ್ನು ಜಾರಿಗೊಳಿಸಿಲ್ಲ. ಆದ್ದರಿಂದ, ಅರ್ಹ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಆಫ್ಲೈನ್ ವಿಧಾನದಲ್ಲಿಯೇ ಅರ್ಜಿಯನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
08156-277026
dm_chikkaballapur8@yahoo.com
ಸಂಪರ್ಕಿಸಲು ಬೆಳಗ್ಗೆ 10 ರಿಂದ ಸಂಜೆ 5 ರೊಳಗೆ ಪ್ರಯತ್ನಿಸುವುದು ಉತ್ತಮ.
ಇದನ್ನ ಓದಿ: Bigg Boss Kannada 9th Week Voting Results, 9th Week New Captain Dhanush, 9th Week Voting Line Results, Bigg Boss Kannada, BBK12
ಅರ್ಜಿಯನ್ನು ಕಳುಹಿಸಬೇಕಾದ ವಿಳಾಸ:
ಅರ್ಜಿ ಫಾರ್ಮ್ ಮತ್ತು ಎಲ್ಲಾ ದಾಖಲೆಗಳ ಸ್ವ-ದೃಢೀಕೃತ ಪ್ರತಿಗಳನ್ನು (Self-attested copies) ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
ಜಿಲ್ಲಾ ವ್ಯವಸ್ಥಾಪಕರು
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಕಚೇರಿ
ಸಂಖ್ಯೆ SA1, ಜಿಲ್ಲಾಡಳಿತ ಭವನ
ಚಿಕ್ಕಬಳ್ಳಾಪುರ – 562101
ಕೊನೆಯ ದಿನಾಂಕ: ಅರ್ಜಿಗಳನ್ನು ಸಲ್ಲಿಸಲು ಡಿಸೆಂಬರ್ 16, 2025 (ಮಂಗಳವಾರ), ಸಂಜೆ 5:30 ಗಂಟೆ ಕೊನೆಯ ದಿನಾಂಕವಾಗಿದೆ. ಈ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಸಲ್ಲಿಸುವ ಎಲ್ಲಾ ದಾಖಲೆಗಳು ಸ್ಪಷ್ಟವಾಗಿ ಓದಲು ಸಾಧ್ಯವಾಗುವಂತೆ ಇರಬೇಕು. ಅರ್ಜಿ ಕಳುಹಿಸುವ ಲಕೋಟೆಯ ಮೇಲೆ ಯೋಜನೆಯ ಹೆಸರನ್ನು ಸ್ಪಷ್ಟವಾಗಿ ಬರೆಯಲು ಸೂಚಿಸಲಾಗಿದೆ. ಅರ್ಜಿಯ ಪರಿಶೀಲನೆಯ ನಂತರ ಅರ್ಹ ಅಭ್ಯರ್ಥಿಗಳಿಗೆ ಮುಂದಿನ ಹಂತದ ಮಾಹಿತಿಯನ್ನು ನಿಗಮದ ಅಧಿಕಾರಿಗಳು ನೀಡುತ್ತಾರೆ.
ಅರ್ಹರಾದ ಪ್ರತಿಯೊಬ್ಬ ವಿದ್ಯಾರ್ಥಿಗಳು ಈ ಸುವರ್ಣ ಅವಕಾಶವನ್ನು ಬಳಸಿಕೊಳ್ಳಿ. ಮತ್ತು ಇದನ್ನ ಆದಷ್ಟು ಎಲ್ಲಾ ಕಡೆ ಶೇರ್ ಮಾಡಿ.
Free Laptop Scheme Apply Now, ಉಚಿತ ಲ್ಯಾಪ್ಟಾಪ್ ವಿತರಣಾ ಯೋಜನೆ, How to Apply New Laptop in Online, Government Free Laptop Scheme, Free Laptop for Karnataka Students
