ನಮಸ್ಕಾರ ಸ್ನೇಹಿತರೇ, ಚಾಲೆಂಜಿಂಗ್ ಸ್ಟಾರ್ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದರು. ಅನಂತರ ನಟ ದರ್ಶನ್ ಸದ್ಯ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಇನ್ನು ಅವರು ತಮ್ಮ ಫಾರ್ಮ್ಹೌಸ್ನಲ್ಲಿ ಈಗ ಕಾಲ ಕಳೆಯುತ್ತಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್ ಅವರು ಸದ್ಯ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾದ ಬಳಿಕ ಸಿನಿಮಾ ಚಿತ್ರಿಕರಣದಲ್ಲಿ ಮತ್ತೆ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನಟ ದರ್ಶನ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎನ್ನುವಂತ ಒಂದು ಸುದ್ದಿ ಕೇಳಿಬರುತ್ತಿದೆ. ಹೌದು ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಸಿಗಲಿದೆ. ಆದ್ದರಿಂದ ಈ ಲೇಖನ ಪೂರ್ತಿಯಾಗಿ ನೋಡಿ.
Darshan's Entry into politics, ದರ್ಶನ್ ತೂಗುದೀಪ ರಾಜಕೀಯಕ್ಕೆ ಎಂಟ್ರಿ, ವಿಜಯ ದಾರಿಯಲ್ಲಿ ನಟ ದರ್ಶನ್, D Boss, Challenging Star Darshan
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ರವರು ಈ ಹಿಂದೆ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದರು. ಅನಂತರ ನಟ ದರ್ಶನ್ ಜಮೀನಿನ ಮೇಲೆ ಹೊರ ಬರುತ್ತಾರೆ. ಇನ್ನು ದರ್ಶನ್ ರವರು ಬೆನ್ನು ನೋವಿನಿಂದ ಬಳಲುತ್ತಿರುವ ಬೆನ್ನಲ್ಲೇ, ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಇವರು ತಮ್ಮ ಫಾರ್ಮ್ ಹೌಸ್ ನಲ್ಲಿ ಕಾಲ ಕಳೆಯುತ್ತಿದ್ದಾರೆ.
ಇನ್ನು ದರ್ಶನ್ ಅವರ ಮುಂದಿನ ಸಿನಿಮಾ ಬಗ್ಗೆ ಅವರ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಇದರ ಜೊತೆಗೆ ಅವರ ರಾಜಕೀಯ ಪ್ರವೇಶದ ಬಗ್ಗೆ ಕೂಡ ಚರ್ಚೆ ಜೋರಾಗುತ್ತಿದೆ. ನಟ ದರ್ಶನ್ ರಾಜಕೀಯಕ್ಕೆ ಬಂದೇ ಬರ್ತಾರೆ ಅವರು ತಮ್ಮದೇ ಆದ ಪಕ್ಷ ಕಟ್ಟಿ ಚುನಾವಣೆಗೆ ನಿಲ್ತಾರೆ ಎನ್ನುವ ವಿಚಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.
ನಟ ದರ್ಶನ್ ರಾಜಕೀಯಕ್ಕೆ ಎಂಟ್ರಿ:
ನಟ ದರ್ಶನ್ ರಾಜಕೀಯ ಜೀವನದ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲವಾದರೂ ಸಹ ಅವರು ಮುಂದೊಂದು ದಿನ ರಾಜಕೀಯಕ್ಕೆ ಬರುವುದು ಖಚಿತ ಎಂದು ಹೇಳಲಾಗಿದೆ. ಖ್ಯಾತಿ ಜ್ಯೋತಿಷಿಯೊಬ್ಬರಾದ ಪ್ರಶಾಂತ್ ಕಿಣಿ ಎನ್ನುವವರು ಕೂಡ ದರ್ಶನ್ ರಾಜಕೀಯದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಹೌದು, ಇದರಿಂದಲೇ ಇದೀಗ ಈ ಒಂದು ವಿಚಾರ ಎಲ್ಲೆಡೆ ಚರ್ಚೆಯಾಗುತ್ತಿದೆ.
Recent Post:
ಬಿಗ್ ಬಾಸ್ 12ರ ಸ್ಪರ್ಧಿಗಳ ವಯಸ್ಸು ಹಾಗೂ ಹುಟ್ಟೂರು, ಬಿಗ್ ಬಾಸ್ 12 ಸ್ಪರ್ಧಿಗಳ ಬಗ್ಗೆ ಸಂಪೂರ್ಣ ಮಾಹಿತಿ, BBK12
ಕಾರು ಟ್ಯಾಕ್ಸಿ ಖರೀದಿಗೆ 4ಲಕ್ಷ ಸಹಾಯಧನ, 4 lakh subsidy for purchase of car taxi, ಸ್ವಾವಲಂಬಿ ಸಾರಥಿ ಯೋಜನೆ 2025
ಜೈಲಿನಿಂದ ಬಂದ ಬಳಿಕ ದರ್ಶನ್ ತೂಗುದೀಪ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಲಿದೆ. ಹೌದು ಅವರ ಸಿನಿಮಾಗಳು ಮತ್ತಷ್ಟು ಯಶಸ್ಸು ಗಳಿಸುತ್ತವೆ. ಆತನ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ದರ್ಶನ್ ಮತ್ತಷ್ಟು ಬಲಶಾಲಿಯಾಗುತ್ತಾರೆ, 2027ರಲ್ಲಿ ದರ್ಶನ್ ರಾಜಕೀಯಕ್ಕೆ ಕೂಡ ಬರುತ್ತಾರೆ, ಅಲ್ಲಿ ದರ್ಶನ್ ರವರು ಗೆಲುವು ಸಾಧಿಸುತ್ತಾರೆ ಎಂದು ಖ್ಯಾತ ಜ್ಯೋತಿಷಿಯೊಬ್ಬರಾದ ಪ್ರಶಾಂತ್ ಕಿಣಿ ರವರು ಹೇಳಿದ್ದಾರೆ.

ದಳಪತಿ ದಾರಿಯಲ್ಲಿ ದರ್ಶನ್ ತೂಗುದೀಪ:
ತಮಿಳು ನಟ ದಳಪತಿ ವಿಜಯ್ ಕೂಡ ಜನಪ್ರಿಯತೆಯ ಉತ್ತುಂಗದಲ್ಲಿರುವಾಗಲೇ ನಟನೆಗೆ ವಿದಾಯ ಹೇಳಿದ್ದು, ತಮಿಳುನಾಡು ರಾಜಕೀಯ ಪ್ರವೇಶವನ್ನ ಮಾಡಿದ್ದಾರೆ. 69ನೇ ಸಿನಿಮಾ ‘ಜನ ನಾಯಗನ್’ ಅವರ ಕೊನೆಯ ಸಿನಿಮಾವಾಗಲಿದೆ. ಅದಾದ ಬಳಿಕ ತಾನು ಸಿನಿಮಾ ಕ್ಷೇತ್ರದಿಂದ ದೂರ ಉಳಿಯುತ್ತೇನೆ. ನಾನು ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಿದ್ದೇನೆ ಎಂದು ತಮಿಳು ನಟ ದಳಪತಿ ವಿಜಯ್ ರವರು ಹೇಳಿದ್ದಾರೆ. ಇದೀಗ ‘ತಮಿಳಿಗ ವೆಟ್ರಿ ಕಳಗಂ’ ಎನ್ನುವ ಪಕ್ಷ ಸ್ಥಾಪನೆ ಮಾಡಿರುವ ಅವರು ತಮಿಳುನಾಡು ಅಭಿವೃದ್ಧಿಗಾಗಿ ರಾಜಕೀಯಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ. 2026ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದ್ದು, ತಾನು ರಾಜಕೀಯ ಕ್ಷೇತ್ರದಲ್ಲಿ ಇರಲು ವಿಜಯ್ ದಳಪತಿ ಅವರು ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ.
ಇನ್ನು ನಟ ದರ್ಶನ್ ಕೂಡ ಇದೇ ರೀತಿಯಲ್ಲಿ ತನ್ನದೆ ಒಂದು ಕರ್ನಾಟಕ ಕೇಂದ್ರಿತ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಚುನಾವಣೆಗೆ ಇಳಿಯುತ್ತಾರೆ ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಅಪಾರ ಅಭಿಮಾನಿಗಳನ್ನು ಕೂಡ ಹೊಂದಿದ್ದು ರಾಜಕೀಯದಲ್ಲೂ ಯಶಸ್ವಿಯಾಗುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದಾರೆ.
ಇನ್ನು ಇದರ ಬಗ್ಗೆ ನಿಮ್ಮ ಅಭಿಪ್ರಾಯ ಎನೆಂಬುದನ್ನು ಕಮೆಂಟ್ ಮಾಡಿ.
Darshan’s Entry into politics, ದರ್ಶನ್ ತೂಗುದೀಪ ರಾಜಕೀಯಕ್ಕೆ ಎಂಟ್ರಿ, ವಿಜಯ ದಾರಿಯಲ್ಲಿ ನಟ ದರ್ಶನ್, D Boss, Challenging Star Darshan
